ದೇವಾನಂದ ಜಿ ಮಹಾರಾಜ್ ಅವರಿಗೆ ಆಮಂತ್ರಣ

ಧರ್ಮಸ್ಥಳ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದಲ್ಲಿ ಸೆಪ್ಟೆಂಬರ್ 3 ರಂದು ನಡೆಯಲಿರುವ ರಾಷ್ಟ್ರೀಯ ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಉತ್ತರಾಖಂಡದ ಸಾಧು ಸಮಾಜದ ಅಧ್ಯಕ್ಷರು ಹಾಗೂ ಜುನಾ ಅಖಾಡದ ಚಾರ್ಮಡಿಯ ಮಹಾಮಂತ್ರಿ ದೇವಾನಂದ ಜಿ ಮಹಾರಾಜ್ ಹರಿದ್ವಾರ ಇವರನ್ನು ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೇಟಿ ಮಾಡಿ ಆಹ್ವಾನ ನೀಡಿದರು. ಇವರೊಂದಿಗೆ ಹದಿನೈದು ಜನ ಮಂಡಳೇಶ್ವರರು ಮತ್ತು ಸಾವಿರಾರು ಜನ ಸಾಧು ಸಂತರು ನಾಗಾ ಸಾಧುಗಳು ಆಗಮಿಸಲಿದ್ದಾರೆ.